Published On Apr 8, 2024
.ರಾಷ್ಟ್ರೀಯ ಬಸವ ತತ್ವ ಪರಿಷತ್ತು ವತಿಯಿಂದ 74 ನೇ ಶರಣ ಸಂಗಮ ಕಾರ್ಯಕ್ರಮ ಬೆಂಗಳೂರಿನ ವಿಜಯನಗರದ ಪಾಲಿಕೆ ಭವನದ ಡಾ.ಎಂ.ಚಿದಾನಂದ ಮೂರ್ತಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ತುಮಕೂರಿನ ವನಕಲ್ಲು ಮಠದ ಪೀಠಾಧ್ಯಕ್ಷ ಡಾ. ಬಸವರಮಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅವರು ಮಾತನಾಡಿ, ಗಾದೆಗಳು ಮತ್ತು ವಚನಗಳು ಅನುಭವ ಜನ್ಯವಾದವು, ಕವನಗಳು, ವೇದಗಳು ಇತ್ಯಾದಿ ಜ್ಞಾನಜನ್ಯ ವಾದಂತಹದ್ದು. ವೇದ ಸುಳ್ಳಾದರೂ ಗಾದೆಸುಳ್ಳಾಗಲ್ಲ ಎಂದರು.
ಪ್ರಾಂಶುಪಾಲರಾದ ಡಾ.ವಿಜಯ ಜಗದೀಶ್, ನಿವೃತ್ತ ತೋಟಗಾರಿಕೆ
ಕೆ.ಟಿ.ರಾಜಣ್ಣ ಮುಖ್ಯಾತಿಥಿಯಾಗಿದ್ದರು.
ಪರಿಷತ್ತಿನ ಅಧ್ಯಕ್ಷ ಡಿ.ಟಿ. ಅರುಣ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿದರು.
ಇದೇ ವೇಳೆ, ಬಿಬಿಎಂಪಿ ವ್ಯವಸ್ಥಾಪಕ ಆರ್.ವಿ.ಶಾಂತಾನಂದ ಮತ್ತು ಅತಿಥಿಗಳನ್ನು ಸನ್ಮಾನಿಸಲಾಯಿತು.
ಜೈಮಾರುತಿ ನಗೆ ಕೂಟದ ಸದಸ್ಯರಿಂದ ವಚನಗಾಯನ ಕಾರ್ಯಕ್ರಮ ನಡೆಯಿತು.