ಮಹಾಶಿವರಾತ್ರಿ ಪ್ರಯುಕ್ತ ಬಿಬಿಎಂಪಿ ವ್ಯವಸ್ಥಾಪಕ ಆರ್.ವಿ.ಶಾಂತನಂದ ಸಾರಥ್ಯದಲ್ಲಿ ಬೆಂಗಳೂರಿನಿಂದ ಶ್ರೀಕ್ಷೇತ್ರ ಧರ್
Bangalore Reports Bangalore Reports
2.62K subscribers
195 views
0

 Published On Feb 26, 2024

ಮಹಾಶಿವರಾತ್ರಿ ಪ್ರಯುಕ್ತ ಬಿಬಿಎಂಪಿ ವ್ಯವಸ್ಥಾಪಕ ಆರ್.ವಿ.ಶಾಂತನಂದ ಸಾರಥ್ಯದಲ್ಲಿ ಬೆಂಗಳೂರಿನಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಎರಡನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಮಂಗಳವಾರ ಮಧ್ಯರಾತ್ರಿಯಿಂದ ಪಾದಯಾತ್ರೆಗೆ ಚಾಲನೆ ದೊರೆಯಲಿದೆ. ಸುಮಾರು 40 ಕ್ಕೂ ಹೆಚ್ಚು ಮಂದಿ ಸಮಾನ ಮನಸ್ಕ ಸ್ನೇಹಿತರು, ಹಿತೈಷಿಗಳು, ಬಂಧು-ಬಾಂಧವರು, ವಿಜಯನಗರ ಕಾಫಿಕಟ್ಟೆ ಸ್ನೇಹಿತರು ಮತ್ತು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸದಾನಂದ ಅವರು ತಿಳಿಸಿದರು.

ಲೋಕಕಲ್ಯಾಣ, ಒತ್ತಡದಲ್ಲಿ ಕಾರ್ಯನಿರ್ವಹಿಸುವ ಬೆಂಗಳೂರು ಮಹಾನಗರ ಪಾಲಿಕೆ ಮತ್ತಿತರ ಇಲಾಖೆಗಳ ನೌಕರರ ಒಳಿತನ್ನು ಬಯಸಿ ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಸೇರಿದಂತೆ ಗುರು ಹಿರಿಯರ ಆಶಿರ್ವಾದಗಳೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಮಧ್ಯರಾತ್ರಿ ಮಹಾಲಕ್ಷ್ಮಿ ಲೇಔಟಿನ ಆಂಜನೇಯ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ನಂತರ ಕುಣಿಗಲ್, ಯಡಿಯೂರು ಮಾರ್ಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಂದಾಜು 9 ದಿನಗಳ ಅ ಅವಧಿಯಲ್ಲಿ ತಲುಪಲಿದೆ ಎಂದೂ ಅವರು ತಿಳಿಸಿದರು.

ಶುಭಹಾರೈಕೆ

ರಾಷ್ಟ್ರೀಯ ಬಸವತತ್ವ ಪರಿಷತ್ತಿನ ಅಧ್ಯಕ್ಷ ಡಿ.ಟಿ. ಅರುಣ್ ಕುಮಾರ್ ಸೇರಿದಂತೆ ಆರ್.ವಿ.ಶಾಂತನಂದ ಅವರ ಅಪಾರ ಸಂಖ್ಯೆಯ ಗೆಳೆಯರ ಬಳಗ
ಎರಡನೇ ವರ್ಷದ ಪಾದಯಾತ್ರೆ ಸುಗಮ ಹಾಗೂ ಯಶಸ್ವಿಯಾಗಿ ನಡೆಯಲಿ ಎಂದು
ಶುಭಹಾರೈಸಿದರು

show more

Share/Embed